ಧರ್ಮಗಳ ಹಿಂದಿರುವ ಕರಾಳ ಹಸ್ತಗಳು

ಸತ್ಯದ ಸೇವೆಯೇ ಧರ್ಮವಾಗಿದೆ. ನಾವು ಸೇವಾ ರೂಪದಲ್ಲಿ ನಿಮ್ಮ ಮುಂದೆ ಬಂದಿರುವುದು ಅತ್ಯಂತ ಅಚ್ಚರಿಯ ಹಾಗೂ ಪ್ರತಿ ಮಾನವನಿಗೂ ಅಪಾಯವನ್ನು ತರುವ ಆ ಭಯಾನಕ ಸೂಕ್ಷ್ಮಲೋಕದ, ಇದುವರೆಗೂ ಬಯಲಾಗದ, ರಹಸ್ಯ ಸತ್ಯಗಳನ್ನು ನಿಮ್ಮ ಮುಂದೆ ಇರಿಸಲು ಆಗಿದೆ!! ಒಬ್ಬಾತನಿಗೆ ರೋಗವಿದೆ ಎಂಬ ಸತ್ಯವನ್ನು ಅರಿತರೆ ಮಾತ್ರವೇ ಆ ಜೀವವನ್ನು ಕಾಪಾಡಲು ಸಾಧ್ಯ. ಆದುದರಿಂದ ಸತ್ಯವು ಎಷ್ಟೇ ಭಯಾನಕವಾದರೂ ಅದರ ಆಪತ್ತನ್ನು ಅರಿಯುವುದು ಮಾನವ ಕುಲಕ್ಕೆ ಅನಿವಾರ್ಯವಾಗುವುದು. ಸೂಕ್ಷ್ಮಲೋಕದ ‘ಇದುವರೆಗೂ ಬಯಲಾಗದ’ ಆ ಭಯಾನಕ ರಹಸ್ಯ ಸತ್ಯಗಳನ್ನು ಮಾನವ ಕುಲವು ಅರಿಯುವಂತೆ ಮಾಡುವಲ್ಲಿ ದಶಕಗಳ ಕಾಲವನ್ನು ಸೂಕ್ಷ್ಮಲೋಕದ ಬೇಹುಗಾರಿಕೆಗಾಗಿ ಮಾತ್ರ ಮುಡಿಪಾಗಿರಿಸಿದ ಆ ಆಧ್ಯಾತ್ಮಿಕ ವ್ಯಕ್ತಿಯು ಓಂದೇವ ಎಂಬವರಾಗಿರುವರು. ಅವರು ಸಂಕ್ಷಿಪ್ತವಾಗಿ ಹೇಳುವುದು ಏನೆಂದರೆ, ಈ ಜಗತ್ತಿನಲ್ಲಿ ಶಾಂತಿಗಾಗಿ ಮಾತ್ರ ಇರುವ ದೇವರ ಮತ್ತು ಧರ್ಮದ ಹೆಸರಲ್ಲೇ ಇಷ್ಟೆಲ್ಲಾ ಧ್ವೇಷ, ಹಿಂಸೆ, ರಕ್ತಪಾತವಾಗಲು ಕಾರಣವು ವಿಭಿನ್ನವಾದ ಮತ್ತು ಅತ್ಯಂತ ಪ್ರಾಚೀನವಾದ ಆ ಒಂದು ವಾಮಾಚಾರ ವ್ಯವಸ್ಥೆ ಎಂದಾಗಿದೆ. ಇನ್ನು, ಉಳಿದೆಲ್ಲಾ ವಾಮಾಚಾರ ವ್ಯವಸ್ಥೆಗಳು ಪ್ರಾದೇಶಿಕವಾಗಿ ಮಾತ್ರ ಇರುವಾಗ, ಈ ಒಂದು ಪ್ರಾಚೀನ ವಾಮಾಚಾರ ವ್ಯವಸ್ಥೆಯು ಮಾತ್ರ, ತನ್ನ ವ್ಯವಸ್ಥೆಯನ್ನು ತಾನೇ ಬೆಳೆಸಿಕೊಳ್ಳುವ ಬುದ್ಧಿಶಕ್ತಿಯನ್ನೂ ಪಡೆದಿರುವ ಕಾರಣ, ಸ್ವತಂತ್ರವಾಗಿ ಬೆಳೆದು, ಇತರ ಎಲ್ಲವನ್ನೂ ಆ ಪ್ರಾಚೀನಕಾಲದಿಂದಲೇ ನುಂಗಿ ಹಾಕಿ, ಅವುಗಳ ನಿಯಂತ್ರಣವನ್ನು ರಹಸ್ಯವಾಗಿ ತನ್ನದಾಗಿಸಿ, ಈ ಜಗತ್ತನ್ನೇ ಹಬ್ಬಿ ಕೊಬ್ಬಿರುವುದು ಎಂದೂ ಅವರು ಹೇಳಿರುವರು! ಮಾತ್ರವಲ್ಲ, ಅದು ಅತ್ಯಂತ ಪ್ರಾಚೀನವಾದ್ದರಿಂದ ಬಹಳ ಕಾಲದ ನಂತರ ಈ ಭೂಮಿಯಲ್ಲಿ ಆರಂಭವಾಗಿರುವ, ಜಗತ್ತಿನ ಸತ್ ಶಕ್ತಿ ಎಂದು ಕರೆಯಲ್ಪಡುವ, ಸೃಷ್ಟಿಕರ್ತ ದೇವ ಸಂಕಲ್ಪಗಳೂ ಸೇರಿದಂತೆ, ಎಲ್ಲ ತರದ ದೇವತಾ ಶಕ್ತಿಗಳನ್ನೂ ಹಾಗೂ ಅನಂತರದಲ್ಲಿ ಈ ಜಗತ್ತಿನ ಎಲ್ಲೆಡೆ ಬೆಳೆಸಿ ತಂದಿರುವ ಮಾನವನ ಆ ಎಲ್ಲಾ ಆಧ್ಯಾತ್ಮ ಭಾಗವನ್ನೂ ಅವು ತಮ್ಮ ನಿಯಂತ್ರಣದಲ್ಲಿ ಇರಿಸಿಕೊಂಡೇ ಬಂದಿವೆ ಎಂಬ ಅಚ್ಚರಿಗೊಳಿಸುವ ರಹಸ್ಯ ಸತ್ಯವನ್ನೂ ಅವರು ಹೇಳಿರುವರು!! ಅದು ಮಾತ್ರವಲ್ಲದೆ, ಪ್ರತಿ ಮಾನವನ ಜೀವನವೂ ಅವುಗಳ ಪೂರ್ವನಿಶ್ಚಿತ ರೀತಿಯಲ್ಲಿ ಮಾತ್ರ ನಡೆಯುವುದು ಎಂದೂ ಹೇಳಿರುವರು. ಈ ಕಾರಣದಿಂದಾಗಿ ಮಾತ್ರ ಜನರು, “ದೇವರೇ ಮಾನವನ ತಲೆಯಲ್ಲಿ ಬರೆದ ಆ ಹಣೆ ಬರಹವನ್ನು ದೇವರಿಗೇ ತಪ್ಪಿಸಲು ಸಾಧ್ಯವಿಲ್ಲ” ಎಂಬ ಗೊಂದಲದ ಮಾತನ್ನು ಆಡುವುದು, ಮತ್ತು ‘ಶಾಂತಿಯ ಧರ್ಮ’ ಮತ್ತು ‘ಕರುಣಾಮಯ ದೇವರು’ ಎಂದು ಹೇಳುತ್ತಾ ಅವುಗಳ ಹೆಸರಲ್ಲೇ ಈ ರೀತಿ ಧ್ವೇಷ, ಹಿಂಸೆ, ರಕ್ತಪಾತಗಳನ್ನು ಮಾಡುತ್ತಿರುವುದು ಎಂದು ಹೇಳಿರುವರು. ಪರಿಹರಿಸಲು ಅಸಾಧ್ಯವಾದ ಈ ಅಪಾಯಕ್ಕೆ, ಕೊನೆಯ ಆ ಒಂದೇ ಪರಿಹಾರವನ್ನು ಅವರು ಹೇಳುವಲ್ಲಿ, ಜಗತ್ತಿನ ಎಲ್ಲಾ ದೇವರು ಮತ್ತು ಧರ್ಮ ಎಂಬ ಸಂಕಲ್ಪಗಳನ್ನೇ ಮುಂದೆ ಇಟ್ಟಿರುವರು, ಮತ್ತು ಅವುಗಳ ‘ಶುದ್ಧೀಕರಿಸಿದ ರೀತಿ’ ಮಾತ್ರವೇ ಕೊನೆಗೂ ಪರಿಹಾರವಾಗಲು ಸಾಧ್ಯವೆಂದೂ ಹೇಳಿರುವರು. ಸೂಕ್ಷ್ಮಲೋಕದ ಹಲವು ರಹಸ್ಯಗಳನ್ನು ಹಾಗೂ ಈವರೆಗೂ ಸ್ಪಷ್ಟತೆ ಇಲ್ಲದೆ ಗೊಂದಲವಾಗಿಯೇ ಇದ್ದ ಹಲವು ವಿಚಾರಗಳನ್ನು ಸತ್ಯದ ಹಿನ್ನೆಲೆಯ ಆ ಚಿಂತನ ಮಂಥನದ ಮೂಲಕ ಜಗತ್ತಿನ ಜನತೆಗೆ ತಿಳಿಸುವ ಪ್ರಯತ್ನವನ್ನು ಕೂಡಾ ಅವರು ಮಾಡಿದ್ದಾರೆ. ಈಗ, ಅವರು ಹೇಳಿರುವ ಆ ಎಲ್ಲಾ ವಿಚಾರಗಳು ಈ ಜಾಲತಾಣದಲ್ಲಿ ನಿಮಗೆ ಲಭ್ಯವಾಗಿದೆ.

ನಿಮಗೆ ಎಲ್ಲಾ ವಿಚಾರಗಳ ಸ್ಪಷ್ಟ ಅರಿವು ಬೇಕೆಂದಲ್ಲಿ ಈ ಕೆಳಗೆ ಸೂಚಿಸಿರುವ ಓದು-ಮಾರ್ಗವನ್ನು ಅನುಸರಿಸಿರಿ.

|| ಪರಿವಿಡಿ – ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||

Downloads