ಸೃಷ್ಟಿಕರ್ತನೆದುರು ಆ ಪ್ರಾಚೀನ ವಾಮಾಚಾರದ ಪ್ರಭಾವವು ನಡೆಯಲಾರದು ಎಂಬ ವಾದ

ಎಲ್ಲಾ ಧರ್ಮಗಳೂ ವಾಮಾಚಾರವನ್ನು ನೇರವಾಗಿ ಬಣ್ಣಿಸಿವೆ. ಕೆಲವು ಧರ್ಮಗಳ ಪುರಾಣಗಳಲ್ಲಿ ಮಾಯಾವಿ ರಾಕ್ಷಸರು ಹಲವು ಋಷಿ ಮುನಿಗಳನ್ನು ಕೊಂದ ಕಥೆಗಳಿವೆ, ಅದೇ ರೀತಿ, ದೇವತೆಗಳನ್ನೂ ಸೋಲಿಸಿದ ಕಥೆಗಳಿವೆ. ಇನ್ನೂ ಕೆಲವು ಧರ್ಮಗಳಲ್ಲಿ, ದೇವರ ಆಶ್ರಯದಲ್ಲೇ ಬೆಳೆಯುತ್ತಿದ್ದ ಆ ಮೊದಲ ಮಾನವ ಮತ್ತು ಆತನ ಪತ್ನಿಯನ್ನು ಸೈತಾನನು ಮೋಸಗೊಳಿಸಿದ ಕಥೆಯೂ ಇರುವುದು. ಇತ್ತ, ಕೆಲವು ನಾಸ್ತಿಕ ಧರ್ಮಗಳಲ್ಲೂ ವಾಮಾಚಾರ ಸೇನೆಯೊಂದಿಗೆ ಯುದ್ಧ ಮಾಡಿದ ಪ್ರಸಂಗದ ವಿಚಾರವೂ ಬರುವುದು. ಈ ಎಲ್ಲಾ ಕಾರಣಗಳಿಂದ ಯಾರಿಗೂ “ಆ ಸೃಷ್ಟಿಕರ್ತನ ಮುಂದೆ ಆ ವಾಮಾಚಾರದ ಶಕ್ತಿ ನಡೆಯಲಾರದು” ಎಂಬ ವಾದ ಮಾಡಲು ಸಾಧ್ಯವಿಲ್ಲ. ಈ ಎಲ್ಲಾ ವಿವರಣೆಗಳು ಆ ಪ್ರಾಚೀನ ವಾಮಾಚಾರದ ರಹಸ್ಯ ಕೈವಾಡವನ್ನು ಎತ್ತಿ ಹಿಡಿಯುವ ಉದಾಹರಣೆಗಳಾಗಿಯೂ ನಮಗೆ ಕಾಣಬಹುದಾಗಿದೆ.

|| ಪರಿವಿಡಿ - ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||