ನಾನು ಇಲ್ಲಿ ಒಂದು ಪ್ರತ್ಯೇಕ ಸತ್ಯಾಂಶವನ್ನು ತಿಳಿಸಲು ಇಷ್ಟಪಡುವೆನು. ಆದಿ ಕಾಲದಿಂದಲೇ ಜನರು ‘ತಮಗೆ ಮಾತ್ರ ತಿಳಿದ ವಿಚಾರ’ ಎಂದು ಹೇಳುತ್ತಾ ಬಂದಿರುವರು. ಹೊಸ ಧರ್ಮ, ಪಂಥಗಳೆಲ್ಲವೂ, ಆಯಾ ಧರ್ಮ, ಪಂಥವು ಹುಟ್ಟುವುದಕ್ಕೆ ಹಿಂದಿನ ಇತರ ಧರ್ಮಗಳಲ್ಲಿ ಹಲವು ಕಡೆ ತಪ್ಪುಗಳಿವೆ ಎಂದು ಹೇಳುತ್ತಾ ಮತ್ತು ‘ತಮಗೆ ಮಾತ್ರ[…]
Category: ಧರ್ಮಗಳ ಹಿಂದಿರುವ ಕರಾಳ ಹಸ್ತಗಳು
ಸೃಷ್ಟಿಕರ್ತ ದೇವನ ಸತ್ಯ ಮತ್ತು ಆ ಮೂಲ ಸತ್ಯ
ಇಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ ಸತ್ಯದ ವೈಜ್ಞಾನಿಕ ನಿರ್ವಚನೆಯಾಗಿದೆ. ಯಾವುದು ಇದೆಯೋ ಅದು ಮಾತ್ರ ಸತ್ಯವಾಗಲು ಸಾಧ್ಯವೆಂದು ಮೊದಲೇ ನಮಗೆ ತಿಳಿದಿದೆ. ಸತ್ಯವೆಂದರೆ ಇದ್ದದ್ದನು ಇದ್ದ ಹಾಗೆ ನೋಡುವುದು, ಹೇಳುವುದು, ಮಾಡುವುದು ಇವೆಲ್ಲಾ ಆಗುವುದು ಎಂದೂ ಹೇಳುತ್ತೇವೆ. ಅಂದರೆ, ಸೃಷ್ಟಿಕರ್ತ ದೇವರು ಇದ್ದಲ್ಲಿ ಆತನು ಒಂದು ಜಾತಿ ಹಣ್ಣನ್ನು[…]
ಸತ್ಯ ಮತ್ತು ನಂಬಿಕೆಯ ವ್ಯತ್ಯಾಸ
ಯಾವುದು ಇದೆಯೋ ಅದು ಸತ್ಯ. ಯಾವುದು ಬದಲಾವಣೆಗೆ ಒಳಗಾಗುವುದಿಲ್ಲವೋ ಅದು ಸತ್ಯ, ಯಾವುದು ಇದ್ದದ್ದು ಇದ್ದ ಹಾಗೆ ಗೋಚರಿಸುವುದೋ ಅದು ಸತ್ಯ. ಇಲ್ಲದರ ಪುಟಗಟ್ಟಲೆ ವಿವರಣೆಯೂ ಸತ್ಯವಾಗಲಾರದು. ಅದೇ ರೀತಿ ಇದ್ದದ್ದನ್ನು ಬೇರೆ ರೀತಿಯಲ್ಲಿ ವಿವರಿಸುವುದೂ ಸತ್ಯವಾಗಲಾರದು. ತಮ್ಮ ತಮ್ಮ ಅಜ್ಞಾನವೆಂಬ ಬಣ್ಣದ ಗಾಜುಗಳ ಮೂಲಕ ನೋಡಿ ತಮಗೆ[…]
ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯ ಅನುಷ್ಠಾನವೇ ಧರ್ಮ
ನಮಗೆ ಎಲ್ಲರಿಗೂ ಧರ್ಮದ ಉದ್ದೇಶವೇನೆಂದು ತಿಳಿದಿದೆ. ಧರ್ಮದ ಕಾರ್ಯವನ್ನು, ಮುಖ್ಯವಾಗಿ, ಎರಡಾಗಿ ವಿಭಾಗಿಸಬಹುದು. ಅವುಗಳು ಸಾಮಾಜಿಕ ಮತ್ತು ಆಧ್ಯಾತ್ಮಿಕವಾಗಿವೆ. ಸಾಮಾಜಿಕವಾಗಿ ಧರ್ಮದ ಕೆಲಸವು, ಸಮಾಜದಲ್ಲಿ ಒಳಿತು ಮಾಡುವವರನ್ನು ಪ್ರೋಹ್ಸಾಹಿಸುವುದು ಮತ್ತು ಕಿಡಿಗೇಡಿಗಳನ್ನು ನಿಯಂತ್ರಿಸುವುದು, ಆಧ್ಯಾತ್ಮಿಕವಾಗಿ ಅದರ ಕೆಲಸವು ಸದ್ಗತಿ, ಮೋಕ್ಷ ಮಾರ್ಗಗಳನ್ನು ತಿಳಿಸಿಕೊಡುವುದು ಆಗಿದೆ. ಅಂದರೆ ಎರಡು ಕಡೆಯೂ[…]
ಮನುಷ್ಯರ ತಪ್ಪು – ಧರ್ಮದ ತಪ್ಪು
ಧರ್ಮ, ಪಂಥಗಳಲ್ಲಿ ಒಳ್ಳೆಯವರು ಯಾರೂ ಜೀವಿಸಿಲ್ಲ ಎಂದು ಯಾರೂ ಹೇಳುವುದಿಲ್ಲ. ಎಷ್ಟೊ ಮಹಾತ್ಮರು ಧರ್ಮ, ಪಂಥಗಳೊಳಗಿದ್ದು ಜೀವಿಸಿರುವರು. ಅವರಲ್ಲಿ ನಿಸ್ವಾರ್ಥ ಸೇವೆಯನ್ನು ಮಾಡಿರುವ ಎಷ್ಟೋ ಮಹಾತ್ಮರನ್ನೂ ನಮಗೆ ತಿಳಿದಿದೆ. ಆದರೆ ನೆನಪಿರಲಿ, ಒಂದು ಧರ್ಮವೆಂದರೆ ಅದು ಬೆರೆಳೆಣಿಕೆಯ ಮಹಾತ್ಮರು ಮಾತ್ರವಲ್ಲ, ಅದು, ಆ ಧರ್ಮ, ಪಂಥಗಳಲ್ಲಿ ಜೀವಿಸುವ ಎಲ್ಲಾ[…]
ಸಾಮಾಜಿಕ ನ್ಯಾಯವೇ ಧರ್ಮದ ಮೊದಲ ಗುರಿ
ಸಜ್ಜನರನ್ನು ರಕ್ಷಿಸುವುದು ಮತ್ತು ದುಷ್ಟರನ್ನು ಶಿಕ್ಷಿಸುವುದು ಧರ್ಮ, ಎಂದು ಧರ್ಮ ಗ್ರಂಥಗಳು ಹೇಳುವವು. ಇಲ್ಲಿ ಬಹಳ ಮುಖ್ಯ ವಿಚಾರ ಒಂದನ್ನು ನಾವು ತಿಳಿದಿರಬೇಕಾಗಿದೆ. ಸಜ್ಜನರನ್ನು ರಕ್ಷಿಸುವುದು ಅಥವಾ ಪ್ರೋತ್ಸಾಹಿಸುವುದು ಮತ್ತು ದುಷ್ಟರನ್ನು ಶಿಕ್ಷಿಸುವುದು, ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯ ಮಾನದಂಡದ ಹಿನ್ನೆಲೆಯಲ್ಲೇ ನಡೆಯುವವು ಎಂದು ತಿಳಿಯಬೇಕಾಗಿದೆ. ಅಂದರೆ,[…]