ದೇವರು ಮತ್ತು ಸೈತಾನ

ಬೆಳಕು ಕತ್ತಲೆಯ ಕೆಲಸವನ್ನು ಮಾಡಲಾರದು, ಅದೇ ರೀತಿ ಕತ್ತಲೆಯು ಬೆಳಕಿನ ಕೆಲಸವನ್ನೂ ಮಾಡಲಾರದು, ಹಾಗೆ ಮಾಡುವುದು ಅವುಗಳ ಸ್ವಭಾವವಲ್ಲ. ಅದೇ ರೀತಿಯಲ್ಲಿ, ಸೈತಾನನು ಈ ಜಗತ್ತಿನಲ್ಲಿ ಒಳ್ಳೆಯತನ, ಶಾಂತಿ, ನೈತಿಕತೆಯನ್ನು ಬೆಳೆಸಲು ಎಂದೂ ಮುಂದಾಗಲಾರನು, ಯಾಕೆಂದರೆ ಆತನ ಗುರಿಯು ಈ ಭೂಮಿಯ ಜನರು ಹಿಂಸೆ, ಧ್ವೇಷ, ಅನೈತಿಕತೆಯಲ್ಲಿ ಮುಳುಗಬೇಕೆಂದಾಗಿದೆ.[…]

Continue reading …

ಧರ್ಮದ ವಿವರಣೆ

ಧರ್ಮದಲ್ಲಿ ಮುಖ್ಯವಾಗಿ ಎರಡು ಭಾಗವಿದೆ. ಅದರಲ್ಲಿ ಒಂದು ಮಾನವನು ಉತ್ತಮ ಜೀವನವನ್ನು ಪಡೆಯುವ ಭಾಗ ಮತ್ತು ಇನ್ನೊಂದು ಆಧ್ಯಾತ್ಮಿಕ ಸ್ವರ್ಗ ಅಥವಾ ಮೋಕ್ಷವನ್ನು ಪಡೆಯುವ ಭಾಗವಾಗಿದೆ. ದೇವರಿಲ್ಲದ ಧರ್ಮಗಳೂ ಇರುವ ಕಾರಣ ದೇವರು ಧರ್ಮಕ್ಕೆ ಒಂದು ಅನಿವಾರ್ಯ ಘಟಕವಲ್ಲ ಎಂದು ಅದರಿಂದಲೇ ತಿಳಿದುಕೊಳ್ಳಬಹುದು. ಇನ್ನು, ಮರಣಾನಂತರ ಮೋಕ್ಷವನ್ನು ಪಡೆವ[…]

Continue reading …

ಸತ್ಯ ಮತ್ತು ನಂಬಿಕೆಯ ವ್ಯತ್ಯಾಸ

ಯಾವುದು ಇದೆಯೋ ಅದು ಸತ್ಯ. ಯಾವುದು ಬದಲಾವಣೆಗೆ ಒಳಗಾಗುವುದಿಲ್ಲವೋ ಅದು ಸತ್ಯ, ಯಾವುದು ಇದ್ದದ್ದು ಇದ್ದ ಹಾಗೆ ಗೋಚರಿಸುವುದೋ ಅದು ಸತ್ಯ. ಇಲ್ಲದರ ಪುಟಗಟ್ಟಲೆ ವಿವರಣೆಯೂ ಸತ್ಯವಾಗಲಾರದು. ಅದೇ ರೀತಿ ಇದ್ದದ್ದನ್ನು ಬೇರೆ ರೀತಿಯಲ್ಲಿ ವಿವರಿಸುವುದೂ ಸತ್ಯವಾಗಲಾರದು. ತಮ್ಮ ತಮ್ಮ ಅಜ್ಞಾನವೆಂಬ ಬಣ್ಣದ ಗಾಜುಗಳ ಮೂಲಕ ನೋಡಿ ತಮಗೆ[…]

Continue reading …

ಪ್ರಾಚೀನ ವಾಮಾಚಾರದ ರಹಸ್ಯ ಕೈವಾಡ ಕಾಣಿಸುವ ಸ್ಥಳಗಳು

ಉತ್ತಮರನ್ನು ಅಧಮರನ್ನಾಗಿ ಮಾಡುವಲ್ಲಿ, ಆದರೆ ಆ ರಹಸ್ಯ ಕೆಲಸವು ಜನರಿಗೆ ‘ಸಹಜ’ ಎಂದು ತೋರುವ ರೀತಿಯಲ್ಲಿ ಮಾತ್ರ ಆ ಪ್ರಾಚೀನ ವಾಮಚಾರವು ಈ ಜಗತ್ತಿನಲ್ಲಿ ಬದಲಾವಣೆಯನ್ನು ತರುತ್ತಿರುವುದು. ಅದು ಅನೈತಿಕ ಕಾಮದ ಆಸೆಯನ್ನು ಹೆಚ್ಚಿಸುತ್ತಾ ಹೋಗುವುದು ಮತ್ತು ಎಲ್ಲರೂ ಇತರ ಧರ್ಮದ ದೇವರನ್ನು ಧ್ವೇಷಿಸುವಂತೆ ಮಾಡಿ, ಆ ಧ್ವೇಷ[…]

Continue reading …

ಸಮಾಜ ಬಂಧು

ನಾವು ಈ ಜಗತ್ತಿನ ಎಲ್ಲೆಡೆ ಹೋಗಿ ಪರಿಶೀಲಿಸಿದರೂ, ನಮಗೆ ಸಿಗುವ ಒಂದು ಸತ್ಯಾಂಶವೇನೆಂದರೆ ಸಮಾಜದ ಅಥವಾ ಜಗತ್ತಿನ ಉದ್ಧಾರಕ್ಕಾಗಿ, ನೇರವಾಗಿ ಸಂಬಂಧಿಸುವವರು ಮಹಾತ್ಮರು ಮಾತ್ರವಾಗಿರುವರು ಎಂದಾಗಿದೆ! ಎಲ್ಲಾ ಧರ್ಮಗಳಲ್ಲಿ ಸ್ವರ್ಗಕ್ಕೆ ಹೋಗುವ ದಾರಿಯಲ್ಲಿರುವವರು ಇರುವರು. ಅದೇ ರೀತಿ ಮೋಕ್ಷವನ್ನು ಪಡೆಯುವ ದಾರಿಯಲ್ಲಿ ಇರುವವರಿರುವರು. ಪಿತೃ ಲೋಕವನ್ನಾದರೂ ಸೇರಿ ಬಿಡಲು[…]

Continue reading …

ಮಕ್ಕಳು, ಜಾತೀಯತೆ, ಮತ್ತು ಧರ್ಮಾಂಧತೆ

ಪ್ರಾಚೀನ ವಾಮಾಚಾರದ ರಹಸ್ಯಗಳ ವಿಚಾರವಾಗಿ ಇನ್ನೊಂದು ವಿಚಾರವನ್ನು ಕೂಡಾ ಇಲ್ಲಿ ತಿಳಿದಿರುವುದು ಉತ್ತಮ ಎಂದು ನನಗನಿಸುವುದು. ಮಾನವನ ಜೀವನದ ಬಾಲ್ಯದ ಕಾಲವು, ಅಂದರೆ,  ಹನ್ನೆರಡು ವರುಷಗಳೊಳಗಿನ ಕಾಲದಲ್ಲೇ ಎಲ್ಲರೂ ಜಾತೀಯತೆಯನ್ನೂ, ಧರ್ಮಾಂಧತೆಯನ್ನೂ  ಪಡೆದಿರುವರು!!!! ಅನಂತರ ಹೆಚ್ಚುವ ಜಾತೀಯತೆ ಮತ್ತು ಧರ್ಮಾಂಧತೆಯು ಅವರೇ  ಮಕ್ಕಳಾಗಿರುವಾಗ ಮಾಡಿಟ್ಟ ಆ ಬಾಲ್ಯದ ಜಾತೀಯತೆ[…]

Continue reading …