ದೇವರನ್ನೇ ನಂಬದ ಧರ್ಮಗಳ ಜನರಿಗೆ ದೇವರ ಹೆದರಿಕೆ ಇಲ್ಲ, ಮತ್ತು ಅದು ಈ ಜಗತ್ತಿಗೆ ಅಪಾಯ ಎಂದು ಹೇಳಿಕೊಳ್ಳುವವರು ಇದ್ದಾರೆ. ನಾವು ನಿಜವಾಗಿಯೂ ದೇವರಿಲ್ಲದ ಧರ್ಮಗಳನ್ನು ಮತ್ತು ದೇವರನ್ನು ಭಯ ಭಕ್ತಿಯಿಂದ ಪಾಲಿಸುವ ಧರ್ಮಗಳನ್ನು ಹೋಲಿಸಿ ನೋಡಿದರೆ, ನಮಗೆ ದೇವರ ಭಯವನ್ನು ಹೊತ್ತುಕೊಂಡಿರುವ ಧರ್ಮಗಳಿಂದಲೇ ಹೆಚ್ಚು ಹಿಂಸೆ ಮಾನವರಿಗೆ[…]
ಧರ್ಮಗಳ ಹೆಸರಲ್ಲಿ ಮಾಡುವ ತಪ್ಪುಗಳು ಮತ್ತು ಧರ್ಮದ ಸಂಬಂಧ
ಹೆಚ್ಚಿನವರು ಧರ್ಮದ ಹೆಸರಲ್ಲಿ ಮಾಡುವ ತಪ್ಪು ಅದು ಧರ್ಮಕ್ಕೆ ಸಂಬಂಧಿಸಿಲ್ಲ ಎನ್ನುವರು. ಈಗ ಧರ್ಮ ಎಂದರೇನು? ಅದು, ತಾನೂ ಚೆನ್ನಾಗಿದ್ದು ಇತರರೂ ಚೆನ್ನಾಗಿರಬೇಕೆಂಬ ನಿಲುವು. ಇದು ವ್ಯಕ್ತಿಯಾದರೂ ಸಮಾಜವಾದರೂ ಇದೊಂದೇ ನಿಲುವು ಇರುವುದು. ತಮ್ಮ ಸ್ವಾರ್ಥದಿಂದಾಗಿ ಇತರರಿಗೆ ತೊಂದರೆಯಾಗುವ ಕಳ್ಳರು ಇತ್ಯಾದಿ ಕಿಡಿಗೇಡಿಗಳನ್ನು ಶಿಕ್ಷಿಸುವುದು ಮತ್ತು ಉತ್ತಮರನ್ನು ರಕ್ಷಿಸುವುದು[…]
ಭೌತಿಕವಾದಿಗಳ ‘ಎಲ್ಲವೂ ಸುಳ್ಳು’ ಎಂಬ ವಾದ
ಮರಣಾನಂತರ ಏನೂ ಇಲ್ಲ ಎನ್ನುವ ಭೌತಿಕವಾದಿಗಳು ಕೂಡಾ ಒಂದು ರೀತಿಯ ನಂಬಿಕೆಯವರು, ಮತ್ತು ಅವರೂ ಒಂದು ಆಧಾರ ರಹಿತ ನಂಬಿಕೆಯ ಪಂಥವನ್ನು ಕಟ್ಟಿಕೊಂಡಿದ್ದಾರೆ. ಆದರೆ, ಅವರನ್ನು ಯಾರೂ ಮತಾಂತರ ಮಾಡುವ ಅಗತ್ಯವಿಲ್ಲ. ಆದರೆ, ಅವರು ಅವರ ಆ ಪಂಥದ ಹೆಸರಲ್ಲಿ ಅನೈತಿಕತೆಯನ್ನು ಜಗತ್ತಿನಲ್ಲಿ ಹೆಚ್ಚಿಸದಿದ್ದರೆ ಸಾಕಾಗುವುದು ಅಷ್ಟೆ. ಸೂಕ್ಷ್ಮ[…]
ಜಾತಿ ಪರ ವಾದ
ಜಾತಿಯನ್ನು ಹೊಗಳುವುದು ಮತ್ತು ಕೊಳೆತ ವಸ್ತುವನ್ನು ಹೊಗಳುವುದು ಒಂದೇ ಆಗುವುದು. ಯಾಕೆಂದರೆ ಮಹಾತ್ಮರು ಕಣ್ಣೀರಿಟ್ಟು ಹೇಳಿದ ಮಾತುಗಳನ್ನು ಕಸದಂತೆ ದೂರ ಎಸೆದು, ಸ್ವಾರ್ಥದ ಮಹಾ ಪಾಪದ ದುರ್ವಾಸನೆಯನ್ನು ಮಲ್ಲಿಗೆಯ ಸುಗಂಧಕ್ಕೆ ಹೋಲಿಸಿ ಜನರನ್ನು ಮೋಸ ಮಾಡಿದ ಆ ವಾಮ ಬುದ್ಧಿಯು ಈ ಜಾತಿಯಾಗುವುದು. ನಂಬಿಕೆಗಳನ್ನು ಉಪಯೋಗಿಸಿ ಮುಗ್ಧ ಜನರನ್ನು[…]
ಓಂದೇವ ಕಿರುನುಡಿಗಳು
ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯೇ ದೇವರು. ಇದಕ್ಕಿಂತ ಮೇಲೆ ದೇವ ಸ್ವಭಾವವಿಲ್ಲ, ಮತ್ತು ಇದಕ್ಕಿಂತ ಕಡಿಮೆ ದೇವ ಸ್ವಭಾವ ಆಗುವುದಿಲ್ಲ. ಹಲವು ಸಲ ಚಿಂತಿಸಿದಲ್ಲಿ ನಿಮಗೆ ಸತ್ಯವು ದೊರಕಲೂಬಹುದು, ಆದರೆ ಜೀವನ ಪೂರ್ತಿ ಯಾವುದನ್ನಾದರೂ ನಂಬಿದಲ್ಲಿ ಆ ನಂಬಿಕೆ ಮಾತ್ರ ಉಳಿಯುವುದು ಹೊರತು ಅದು ಸತ್ಯವನ್ನು ತರಲಾರದು. ನಿಜವಾಗಿಯೂ[…]
ಮಹಾತ್ಮರ ಜೀವನ
ಸಂಸಾರದ ತ್ಯಾಗವು ಅನಿವಾರ್ಯವಾಗಿರುವುದು ಸನ್ಯಾಸಿಗಳಿಗೆ ಎಂದು ಶಾಸ್ತ್ರವು ಹೇಳುವುದು. ಯಾಕೆಂದರೆ ಆತನು ತನ್ನ ಅಸ್ತಿತ್ವವನ್ನು ಸೂಕ್ಷ್ಮ ಲೋಕದಲ್ಲಿ ಎಂದೆಂದಿಗಾಗಿ ಇಲ್ಲವಾಗಿಸುವ ಪ್ರಯತ್ನದಲ್ಲಿರುವನು, ಅದಕ್ಕಾಗಿ ಆತನು ಎಲ್ಲವನ್ನೂ ತ್ಯಜಿಸಬೇಕಾಗಿದೆ. ಆದರೆ, ಮಹಾತ್ಮರಾಗಬೇಕಾದರೆ, ಜನರು ಸಾಮಾನ್ಯವಾಗಿ ತಪ್ಪಾಗಿ ತಿಳಿದಿರುವಂತೆ, ಸರ್ವವನ್ನೂ ತ್ಯಾಗಮಾಡಬೇಕಾಗಿಲ್ಲ. ಮಹಾತ್ಮನು ಸಂಸಾರದಲ್ಲಿದ್ದೇ ಮನೋ ಪರಿಶುದ್ದಗೊಳಿಸುವ ಹಿನ್ನೆಲೆಯಲ್ಲಿ, ಆ ಶಾಂತಿಯ[…]