ಸ್ವಧರ್ಮ ಅಥವಾ ವ್ಯಕ್ತಿಧರ್ಮ ಮತ್ತು ಸಾಮಾಜಿಕ ಧರ್ಮ ಎಂದು ಬೇರೆ ಬೇರೆ ಇವೆಯೇ? ಉತ್ತರ- ಧರ್ಮ ಎಂಬ ಶಬ್ಧವು ನಿಸ್ವಾರ್ಥತೆ ಭಾವನೆಯನ್ನು ಪ್ರಕಟಗೊಳಿಸುವುದು. ‘ಸ್ವ’ ಧರ್ಮ ಅಥವಾ ವ್ಯಕ್ತಿ ಧರ್ಮ ಎಂದು ಹೇಳುವಾಗ ಅಲ್ಲಿ ‘ಸ್ವ’ ಎಂಬುವುದು, ಸ್ವಾರ್ಥ ಅಥವಾ ಒಬ್ಬ ವ್ಯಕ್ತಿಯು ತನ್ನ ವ್ಯಕ್ತಿತ್ವದ ಹಿನ್ನೆಲೆಯಲ್ಲಿ ಆಲೋಚನೆ[…]
ಪ್ರಶ್ನೋತ್ತರಗಳು
ದೇವರು, ಧರ್ಮ, ನಂಬಿಕೆ, ಆಚಾರ, ಮತ್ತು ಆಧ್ಯಾತ್ಮ ಇವುಗಳ ಹಿನ್ನೆಲೆಯಲ್ಲಿ ನಿಮ್ಮ ನಿಲುವನ್ನು ಸ್ಪಷ್ಟಪಡಿಸಬಹುದೇ? ನಾನು ಆಚಾರ, ನಂಬಿಕೆಗಳು ಯಾರಿಗೂ ಬೇಡ ಎಂದೆಲ್ಲಾ ಹೇಳುವುದಿಲ್ಲ. ಯಾವೆಲ್ಲಾ ಆಚಾರ ನಂಬಿಕೆಗಳು ಮಾನವರನ್ನು ತಮ್ಮೊಳಗೆ ಬೇರ್ಪಡಿಸುವವೋ, ಮತ್ತು ಮಾನವೀಯತೆಯೇ ಇಲ್ಲದವುಗಳಾಗಿರುವವೋ, ಅವುಗಳ ಬಗ್ಗೆ ಎಚ್ಚರಿಕೆಯಿಂದ ಇರಲು ಹೇಳುವೆನು ಅಷ್ಟೆ. ಅನ್ಯಗ್ರಹಜೀವಿಗಳ ಶಿಲಾಯುಗದಿಂದಲೇ[…]
ಪರಿಚಯ – ಮುಖ್ಯ ವಿಚಾರಗಳು
ಪರಿಚಯ ಓಂದೇವ ಅವರು ಬರೋಬ್ಬರಿ ಹದಿನೈದು ವರ್ಷಗಳಷ್ಟು ಸುಧೀರ್ಘ ಕಾಲ ಸೂಕ್ಷ್ಮದ ಬೇಹುಗಾರಿಕೆಯನ್ನು ಮಾಡಿರುವರು. ಆ ಒಟ್ಟು ಹದಿನೈದು ವರುಷಗಳಲ್ಲಿ ಹೆಚ್ಚು ಕಡಿಮೆ ಏಳೆಂಟು ವರುಷಗಳು ಕಳೆದ ನಂತರದಲ್ಲಿ ಮಾತ್ರವೇ ಅವರು ಅದರ ಕುರಿತಾಗಿ ಬರೆಯಲು ಆರಂಭಿಸಿರುವುದು. ನಾವು ಅವರ ಬರಹಗಳನ್ನು ಈ ಜಾಲತಾಣದಲ್ಲಿ ಪ್ರಸ್ತುತಪಡಿಸುವಾಗ, ಅವರ ಆ[…]
ದೇವರನ್ನೇ ನಂಬದ ಧರ್ಮಗಳು ಮತ್ತು ದೇವರ ಮೇಲಿನ ಭಯ
ದೇವರನ್ನೇ ನಂಬದ ಧರ್ಮಗಳ ಜನರಿಗೆ ದೇವರ ಹೆದರಿಕೆ ಇಲ್ಲ, ಮತ್ತು ಅದು ಈ ಜಗತ್ತಿಗೆ ಅಪಾಯ ಎಂದು ಹೇಳಿಕೊಳ್ಳುವವರು ಇದ್ದಾರೆ. ನಾವು ನಿಜವಾಗಿಯೂ ದೇವರಿಲ್ಲದ ಧರ್ಮಗಳನ್ನು ಮತ್ತು ದೇವರನ್ನು ಭಯ ಭಕ್ತಿಯಿಂದ ಪಾಲಿಸುವ ಧರ್ಮಗಳನ್ನು ಹೋಲಿಸಿ ನೋಡಿದರೆ, ನಮಗೆ ದೇವರ ಭಯವನ್ನು ಹೊತ್ತುಕೊಂಡಿರುವ ಧರ್ಮಗಳಿಂದಲೇ ಹೆಚ್ಚು ಹಿಂಸೆ ಮಾನವರಿಗೆ[…]
ಓಂದೇವ ಕಿರುನುಡಿಗಳು
ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯೇ ದೇವರು. ಇದಕ್ಕಿಂತ ಮೇಲೆ ದೇವ ಸ್ವಭಾವವಿಲ್ಲ, ಮತ್ತು ಇದಕ್ಕಿಂತ ಕಡಿಮೆ ದೇವ ಸ್ವಭಾವ ಆಗುವುದಿಲ್ಲ. ಹಲವು ಸಲ ಚಿಂತಿಸಿದಲ್ಲಿ ನಿಮಗೆ ಸತ್ಯವು ದೊರಕಲೂಬಹುದು, ಆದರೆ ಜೀವನ ಪೂರ್ತಿ ಯಾವುದನ್ನಾದರೂ ನಂಬಿದಲ್ಲಿ ಆ ನಂಬಿಕೆ ಮಾತ್ರ ಉಳಿಯುವುದು ಹೊರತು ಅದು ಸತ್ಯವನ್ನು ತರಲಾರದು. ನಿಜವಾಗಿಯೂ[…]
ಮಹಾತ್ಮರ ಜೀವನ
ಸಂಸಾರದ ತ್ಯಾಗವು ಅನಿವಾರ್ಯವಾಗಿರುವುದು ಸನ್ಯಾಸಿಗಳಿಗೆ ಎಂದು ಶಾಸ್ತ್ರವು ಹೇಳುವುದು. ಯಾಕೆಂದರೆ ಆತನು ತನ್ನ ಅಸ್ತಿತ್ವವನ್ನು ಸೂಕ್ಷ್ಮ ಲೋಕದಲ್ಲಿ ಎಂದೆಂದಿಗಾಗಿ ಇಲ್ಲವಾಗಿಸುವ ಪ್ರಯತ್ನದಲ್ಲಿರುವನು, ಅದಕ್ಕಾಗಿ ಆತನು ಎಲ್ಲವನ್ನೂ ತ್ಯಜಿಸಬೇಕಾಗಿದೆ. ಆದರೆ, ಮಹಾತ್ಮರಾಗಬೇಕಾದರೆ, ಜನರು ಸಾಮಾನ್ಯವಾಗಿ ತಪ್ಪಾಗಿ ತಿಳಿದಿರುವಂತೆ, ಸರ್ವವನ್ನೂ ತ್ಯಾಗಮಾಡಬೇಕಾಗಿಲ್ಲ. ಮಹಾತ್ಮನು ಸಂಸಾರದಲ್ಲಿದ್ದೇ ಮನೋ ಪರಿಶುದ್ದಗೊಳಿಸುವ ಹಿನ್ನೆಲೆಯಲ್ಲಿ, ಆ ಶಾಂತಿಯ[…]